ಹಿರಿಯಡ್ಕ ಮೇಳ: ವೀರಭದ್ರನ ವೇಷಕ್ಕೆ ರಜತ ಕಿರೀಟ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಡಿಸೆ೦ಬರ್ 21 , 2013
|
ಡಿಸೆ೦ಬರ್ 21, 2013
|
ಹಿರಿಯಡ್ಕ ಮೇಳ: ವೀರಭದ್ರನ ವೇಷಕ್ಕೆ ರಜತ ಕಿರೀಟ
ಉಡುಪಿ
ಹಿರಿಯಡ್ಕ ಪೇಟೆಯವರು ಹಾಗೂ ಕ್ಷೇತ್ರಾಭಿಮಾನಿಗಳ ವತಿಯಿಂದ ಹಿರಿಯಡ್ಕ ಯಕ್ಷಗಾನ ಮೇಳದ ವೀರಭದ್ರ ವೇಷದ ಬಳಕೆಗಾಗಿ ರಚಿಸಲ್ಪಟ್ಟ ರಜತ ಕಿರೀಟ ಸಮರ್ಪಣಾ ಸಮಾರಂಭವು ಡಿ. 22ರಂದು ಸಂಜೆ 6ಕ್ಕೆ ಹಿರಿಯಡ್ಕ ಶ್ರೀ ವೀರಭದ್ರ ದೇವಳದ ಬಾಕಿಮಾರು ಗದ್ದೆಯಲ್ಲಿ ಪ್ರದೀಪ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಹಿರಿಯ ಮದ್ದಳೆವಾದಕ, ಜಾನಪದ ತಜ್ಞ ಹಿರಿಯಡಕ ಗೋಪಾಲ ರಾವ್ ಅವರು ರಜತ ಕಿರೀಟವನ್ನು ಮೇಳಕ್ಕೆ ಸಮರ್ಪಿಸುವರು. ಎಂಐಟಿ ಪ್ರಾಧ್ಯಾಪಕ ಎಸ್.ವಿ. ಉದಯಕುಮಾರ್ ಶೆಟ್ಟಿ ಶುಭ ಹಾರೈಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಡಳಿತಾಧಿಕಾರಿ ಎಚ್. ಕೃಷ್ಣಮೂರ್ತಿ, ಡಾ| ಸುನಿಲ್ ಹೆಗ್ಡೆ, ಉದ್ಯಮಿ ಕೆ. ನಟರಾಜ ಹೆಗ್ಡೆ, ಹಿರಿಯಡ್ಕ ದೇವಳದ ಅರ್ಚಕ ನಾರಾಯಣ ಭಟ್ ಭಾಗವಹಿಸುವರು.
ಅದೇ ದಿನ ಸಂಜೆ 5ಕ್ಕೆ ಹಿರಿಯಡ್ಕ ಶ್ರೀ ಗಣೇಶ ಕಲಾಮಂದಿರದ ಎದುರಿನಿಂದ ರಜತ ಕಿರೀಟವನ್ನು ಮೆರವಣಿಗೆಯಲ್ಲಿ ತರಲಾಗುವುದು. ಸಂಜೆ 7ರಿಂದ ಹಿರಿಯಡ್ಕ ಮೇಳದವರಿಂದ 'ಹಿರಿಯಡ್ಕ ಕ್ಷೇತ್ರ ಮಹಾತೆ¾' ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದು ಊರ ಹತ್ತು ಸಮಸ್ತರ ಪರವಾಗಿ ಹಿರಿಯಡ್ಕ ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಕೃಪೆ :
http://www.udayavani.com
|
|
|